Google search engine
Home♦️ಇತ್ತೀಚಿನ ಸುದ್ದಿಗಳು.ಜನಸ್ನೇಹಿ ತಹಶೀಲ್ದಾರ್ ಕಿರಣ್ ಗೌರಯ್ಯ ಅವರಿಗೆ ನಾಳೆ ಕುಶಾಲನಗರದಲ್ಲಿ ನಾಗರಿಕ ಸನ್ಮಾನ ಹಾಗೂ ಬೀಳ್ಗೊಡುಗೆ

ಜನಸ್ನೇಹಿ ತಹಶೀಲ್ದಾರ್ ಕಿರಣ್ ಗೌರಯ್ಯ ಅವರಿಗೆ ನಾಳೆ ಕುಶಾಲನಗರದಲ್ಲಿ ನಾಗರಿಕ ಸನ್ಮಾನ ಹಾಗೂ ಬೀಳ್ಗೊಡುಗೆ

ಕುಶಾಲನಗರ ಮೇ.30: ನೂತನ ಕುಶಾಲನಗರ ತಾಲ್ಲೂಕಿನ ಪ್ರಥಮ ತಹಶೀಲ್ದಾರರಾಗಿ ಜನಪರ, ದಕ್ಷ ಹಾಗೂ ಕ್ರಿಯಾಶೀಲ ಆಡಳಿತ ನೀಡಿದ ಕಿರಣ್ ಗೌರಯ್ಯ ಅವರು ತಮ್ಮ ವೃತ್ತಿ ಜೀವನದ ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮೇ 31ರ ಭಾನುವಾರ (ನಾಳೆ) ಕುಶಾಲನಗರದ ಕಲಾಭವನದಲ್ಲಿ ಅವರಿಗೆ ‘ಪ್ರಜ್ಞಾವಂತ ನಾಗರಿಕ ವೇದಿಕೆ’ ಮತ್ತು ತಾಲ್ಲೂಕಿನ ವಿವಿಧ ಸಂಘ-ಸಂಸ್ಥೆಗಳ ವತಿಯಿಂದ ಭವ್ಯ ನಾಗರಿಕ ಸನ್ಮಾನ ಹಾಗೂ ಪ್ರೀತಿಪೂರ್ವಕ ಬೀಳ್ಗೊಡುಗೆ ಸಮಾರಂಭವನ್ನು ಆಯೋಜಿಸಲಾಗಿದೆ.

ತಾಲ್ಲೂಕು ಕಚೇರಿಗೆ ಪ್ರತಿನಿತ್ಯ ಅಳುಕಿನಿಂದಲೇ ಬರುತ್ತಿದ್ದ ಜನಸಾಮಾನ್ಯರನ್ನು ಸೌಜನ್ಯದಿಂದ ಕರೆದು, ಕೂರಿಸಿ, ಅವರ ಸಮಸ್ಯೆಗಳನ್ನು ಆಲಿಸಿ ಬಗೆಹರಿಸಿಕೊಡುವ ಕಿರಣ್ ಗೌರಯ್ಯ ಅವರ ಕಾರ್ಯಶೈಲಿ ಸಾರ್ವಜನಿಕರಲ್ಲಿ  ಮೆಚ್ಚುಗೆಗೆ ಪಾತ್ರವಾಗಿತ್ತು

​ಒಳಿತನ್ನು ಪುರಸ್ಕರಿಸುವ ಮತ್ತು ಒಳ್ಳೆಯವರನ್ನು ಬೆಂಬಲಿಸುವ ಆಶಯದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಪ್ರಜ್ಞಾವಂತ ನಾಗರಿಕ ವೇದಿಕೆಯು, ತಾಲ್ಲೂಕಿನ ಸಜ್ಜನ ನಾಗರಿಕರ ಸಮ್ಮುಖದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು. ವಿ.ಪಿ ಶಶಿಧರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

error: Content is protected !!