ಮಡಿಕೇರಿ ಡಿ.31: ಆಂಧ್ರಪ್ರದೇಶದ ಕಡತದಲ್ಲಿ ನಡೆದ ಮೂರನೆಯ ರಾಷ್ಟ್ರೀಯ ಸಬ್ ಜೂನಿಯರ್ ಬಾಲಕಿಯರ ವಿಭಾಗದ ಹಾಕಿ ಪಂದ್ಯಾಟದಲ್ಲಿ ಕರ್ನಾಟಕ ರಾಜ್ಯ ತಂಡ ಪೈನಲ್ ಪ್ರವೇಶಿಸಿ ಆಂಧ್ರಪ್ರದೇಶದ ವಿರುದ್ದ 2-0 ಗೋಲುಗಳ ಅಂತರದಲ್ಲಿ ಜಯಬೇರಿ ಬಾರಿಸಿ ಚಿನ್ನದ ಪದಕ ಪಡೆದುಕೊಂಡಿತು . ಪ್ರಶಸ್ತಿ ವಿಜೇತ ಕರ್ನಾಟಕ ರಾಜ್ಯ ತಂಡದಲ್ಲಿ ಕೊಡಗು ಜಿಲ್ಲೆಯ ವಿರಾಜಪೇಟೆ ಬ್ಲಾಕ್ನ ಲಯನ್ಸ್ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಗ್ರೀಷ್ಮ ಪೊನ್ನಪ್ಪ ಪಿ.ಹಾಗು ಚರಿಷ್ಮ ಕಾವೆರಮ್ಮ ಸಿ. ಪ್ರತಿನಿಧಿಸಿ ಉತ್ತಮ ಆಟದ ಪ್ರದರ್ಶನ ನೀಡಿದರು.






