ಮಡಿಕೇರಿ ಡಿ.26: ಜಮ್ಮ ಸಮಸ್ಯೆಗೆ ಸರಕಾರದಿಂದ ಶಾಶ್ವತ ಪರಿಹಾರ ದೊರಕಿಸುವಲ್ಲಿ ಪರಿಶ್ರಮ ಪಟ್ಟ ಮಡಿಕೇರಿ ಕ್ಷೇತ್ರದ ಶಾಸಕರಾದ ಡಾ. ಮಂತರ್ ಗೌಡ ಅವರಿಗೆ ಜಮ್ಮ ಹಿಡುವಳಿದಾರರು ಮತ್ತು ಕ್ಷೇತ್ರದ ಬೆಳೆಗಾರರು, ಸಾರ್ವಜನಿಕರ ಪರವಾಗಿ ಇಂದು ಆತ್ಮೀಯ ಅಭಿನಂದನೆ ಸಲ್ಲಿಸಲಾಗುತ್ತದೆ.
ಇಂದು ಸುಳ್ಯದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾನ್ಯ ಶಾಸಕರು ಮಧ್ಯಾನ 2 ಗಂಟೆಗೆ ಮಡಿಕೇರಿಗೆ ಆಗಮಿಸುವ ಸಂದರ್ಭ ಮಡಿಕೇರಿ ಜಿ. ಟಿ. ಸರ್ಕಲ್ ನಲ್ಲಿ ಸ್ವಾಗತ ನೀಡಲಾಗುತ್ತದೆ. ಅನಂತರ 2.30 ಗಂಟೆಗೆ ಮಡಿಕೇರಿ ಮೈಸೂರು ರಸ್ತೆಯಲ್ಲಿ ಇರುವ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಅಭಿನಂದನಾ ಸಭೆ ಆಯೋಜಿತವಾಗಿದೆ. ಸರ್ವರೂ ಈ ಸಂದರ್ಭ ಪಾಲ್ಗೊಳ್ಳುವಂತೆ ಪ್ರಕಟಣೆಯಲ್ಲಿ ಮನವಿಮಾಡಲಾಗಿದೆ.




