
ಮಡಿಕೇರಿ ಜ.28: ಇತ್ತೀಚೆಗೆ ಮಾಂದಲಪಟ್ಟಿ ಪ್ರವಾಸಿ ತಾಣದಲ್ಲಿ ಜೀಪು ಚಾಲಕರೊಬ್ಬರು ಪ್ರವಾಸಿಗರಿಂದ ಅಧಿಕ ಬಾಡಿಗೆ ವಸೂಲಿ ಮಾಡಿರುವುದು ಹಾಗು ಜೀಪಿನ ನೋಂದಣಿ ಬೋರ್ಡ್ ಅನ್ನು ಬದಲಿಸಿರುವ ಪ್ರಕರಣ ಕುರಿತಾಗಿ ಕೊಡಗು ಜಿಲ್ಲಾ ಪೊಲೀಸ್ ವರಷ್ಠಾಧಿಕಾರಿಗಳಾದ ಆರ್.ಎನ್. ಬಿಂದು ಮಣಿ ಅವರ ಸಮಕ್ಷಮದಲ್ಲಿ ಮಾಂದಲಪಟ್ಟಿ ಚಾಲಕರ ಸಂಘದ ಸಭೆ ಕರೆಯಲಾಗಿತ್ತು.
ಈ ಸಂದರ್ಭ ಪ್ರವಾಸಿಗರೊಂದಿಗೆ ಅನುಚಿತವಾಗಿ ವರ್ತಿಸದಂತೆ ಹಾಗೂ ವಾಹನ ದಾಖಲಾತಿಗಳನ್ನು ಕಾನೂನುಬದ್ದವಾಗಿ ಹೊಂದಿರುವಂತೆ ಸಭೆಯಲ್ಲಿ ಚಾಲಕರ ಸಂಘದ ಸದಸ್ಯರಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಯಿತು.




