ಕುಶಾಲನಗರ ಡಿ.24: ಮಹಾಶಿವರಾತ್ರಿ ಶಿವಾಂಗ ಸಾಧನದ ಅಂಗವಾಗಿ ಸಾಗುತ್ತಿರುವ ರಥಯಾತ್ರೆಯ ಆದಿ ಯೋಗಿ ಶಿವ ಗಂಗಾ ರಥವನ್ನು ಗುಡ್ಡೆಹೊಸೂರುವಿನಲ್ಲಿ ಶ್ರದ್ಧಾ ಭಕ್ತಿಯಿಂದ ಸ್ವಾಗತಿಸಿ ಬರಮಾಡಿಕೊಳ್ಳಲಾಯಿತು.
ಈ ಸಂದರ್ಭ ವೀರಾಂಜನೇಯ ಸೇವಾ ಸಮಿತಿಯ ಅಧ್ಯಕ್ಷರಾದ ಅರುಣ್ , ಸಮಿತಿ ಉದಯ ಕೋಳಿಬೈಲು ಕಾರ್ಯದರ್ಶಿ, ರಂಜು, ನಿತ್ಯಾನಂದ ಕೊಡೆಕಲ್ ರಾಜೇಶ್ ಇಂಟರ್ಲಾಕ್ ಲೋಕಿ ನವೀನ್ ಮಾದಪಟ್ಟಣ, ಸಂತೋಷ್, ನಾಯರ್, ಉಮೇಶ, ರವಿ ಎಸ್ ಕೆ, ಕಿರಣ್ ಹೊಸಕೋಟೆ, ಸಂಘಟನೆಯ ಪ್ರಮುಖರಾದ ಮಹೇಂದ್ರ ಮತ್ತು ರಮೇಶ್ ಬೊಟ್ಟು ಮನೆ, ಹಾಗೂ ಗುಡ್ಡೆಹೊಸೂರುವಿನ ಗ್ರಾಮಸ್ಥರು ಭಕ್ತಾದಿಗಳು ರಥ ಎಳೆಯುವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.





